17 December 2007

ವಾರ್ಷಿಕ ವ್ಯಸನ

ವರ್ಷ ಮುಗಿಯುತ್ತಾ ಬಂದ ಹಾಗೆ ನೆನಪಾಗುವುದು Bob Geldof ಎನ್ನುವವ ಹೇಳಿದ ಮಾತು: "ಇದು ಕ್ರಿಸ್ಮಸ್ ಸಮಯ. ಹೆದರಿಕೆ ಪಡುವ ಯಾವುದೇ ಕಾರಣವಿಲ್ಲ". ಆದರೆ ಜಪಾನಿನಲ್ಲಿ ಇದು ನೀವು ಅತಿ ಕಾಳಜಿಯಿಂದ ಇರಬೇಕಾದ ಸಮಯ. ರಸ್ತೆಯಲ್ಲಿ ಸುರಕ್ಷಿತವಾಗಿ ತಿರುಗುವುದು ಪಾದಚಾರಿಗಳ ಕೆಲಸ ಎಂದರೆ ತಪ್ಪೇನೂ ಇಲ್ಲ. ರಸ್ತೆಯ ಮೇಲೆ ತಿರುಗುವಾಗ ಅತಿ ಕಾಳಜಿಯಿಂದ ತಿರುಗಬೇಕು. ಇಲ್ಲವಾದಲ್ಲಿ ಕುಡಿದು ತೂರಾಡುವವರ ನೆರೆ ಹಾವಳಿಯಲ್ಲಿ ಸಿಲುಕುವ ಎಲ್ಲ ಚಾನ್ಸಸ್ ನಿಮ್ಮದು. ರಸ್ತೆ ಉದ್ದ, ಅಗಲ ಅಳೆಯುವವರ ಸಂತೆ ಸರ್ವೇ ಸಾಮಾನ್ಯ. ಉದ್ಯೋಗದಲ್ಲಿರುವವರ ಅತಿ ಪ್ರೀತಿಯ ಕೆಲಸ ಕುಡಿತ ಅಂತ ಕಾಣಿಸುತ್ತೆ ಇಲ್ಲಿ. ತಮ್ಮ ದೇಹದ ಅಂಗ ಎಷ್ಟು ತೆಗೆದುಕೊಳ್ಳಲು ಸಾಧ್ಯವೋ ಅದಕ್ಕೂ ಮೀರಿ ಕುಡಿಯುವುದು ಇಲ್ಲಿಯವರ ಪರಿಪಾಟ ಅನ್ನಿಸುತ್ತೆ.

ಇದಕ್ಕೆ ಕಾರಣ ಸರಿ ಸುಮಾರು ಎಲ್ಲ ಕಂಪನಿಗಳೂ ತಮ್ಮ ಕೆಲಸಗಾರರಿಗೆ ಡಿಸೆಂಬರ ತಿಂಗಳಲ್ಲಿ ಆ ವರ್ಷವ ಮರೆಯಲು ನೀಡುವ ಪಾನಗೋಷ್ಠಿ. ಮಜದ ವಿಚಾರವೆನೆಂದರೆ ಬಹಳ ಜನ ವರ್ಷವ ಮರೆಯುವದೊಂದಿಗೆ ತಮ್ಮ ಹೆಸರು, ಮನೆಗೆ ಹೋಗುವ ದಾರಿ ಹಾಗೂ ತಮ್ಮ ನೈಸರ್ಗಿಕ ಕ್ರಿಯೆಯ ಮೇಲಿನ ಹತೋಟಿ ಎಲ್ಲವನ್ನು Temporaryಯಾಗಿ ಕಳೆದುಕೊಂಡಿರುತ್ತಾರೆ !

ಈ ವಾರ್ಷಿಕ ಪಾರ್ಟಿಯ ಹೆಸರು – ‘ಬೊನೆನ್ ಕೈ ಪಾರ್ಟಿ’. ಜಪಾನಿಗರು ಆಂಗ್ಲ ಭಾಷೆಯಿಂದ ಎರುವಲು ಪಡೆದ ಶಬ್ಧದ ರೂಪಾಂತರ ಇದು. ಮೂಲ ಪದ – “ Bonkers “. ಕಾನೂನಿನ ಕಾಳಜಿ ಇಲ್ಲದೆ , ಜನರ ಹುಚ್ಚು ನಡತೆಗೆ ಅತಿ ಹತ್ತಿರದ ಶಬ್ದ ಇದು.

ಜನರು ನೀರಿನಂದದಿ ಕುಡಿಯುವುದು ಇದು :




ಮನೆಗೆ ಹೋಗುವ ಒಂದು ಶೈಲಿ – ರೈಲಿನಲ್ಲಿ :



ಮತ್ತು ಬಾಗಿಲಿನಲ್ಲಿ ಮೂಡಿದ ಚಿತ್ತಾರ !


10 November 2007

ಬಾಳ ಪುಟದಿಂದ ೦.೧



ನಾನು ಒಂದು ವೇಳೆ ....
ನನ್ನ ಮುಂದಿನ ದೊಡ್ಡಸ್ತಿಕೆಯ ಬಗ್ಗೆ ಆಲೋಚಿಸದಿದ್ದರೆ,
ಮತ್ತು ಸುತ್ತಲಿನ ಹಸಿರಿನ ಬಗ್ಗೆ ಹಾಗೂ ಕಟ್ಟಡದ ಹೊಸ ಕಣ್ಣಿನಲ್ಲಿ ನೋಡಿದ್ದರೆ,
ಮತ್ತು ನನ್ನ ಸುತ್ತಮುತ್ತಲಿರುವವರ ಜೊತೆ ಕೈಜೋಡಿಸಿದ್ದರೆ,
ಮತ್ತು ಹಂಚಿನ ಮೇಲೆ ಬಿದ್ದ ಮಳೆ ಹನಿಯ ಶಬ್ದವ ಆಲಿಸಿದ್ದರೆ,
ಮತ್ತು ಮೊದಲ ಮಳೆಯ ಮಣ್ಣಿನ ವಾಸನೆ ತೆಗೆದುಕೊಂಡಿದ್ದರೆ,
ಮತ್ತು ಕ್ಷಣಕಾಲ ನನ್ನ ಮೇಲೆ ನಾನು ಹಾಕಿಕೊಂಡ ಕಟ್ಟುಪಾಡು ತೆಗೆದಿದ್ದರೆ,
ಮತ್ತು ನನ್ನ ಬಾಳಸಂಗಾತಿಯ ಹೆಗಲ ಮೇಲೆ ಕೈಹಾಕಿ ಹಿಡಿದುಕೊಂಡಿದ್ದರೆ,

ಹೌದು...... ಇದ್ಯಾವುದಕ್ಕೂ ಇನ್ನೂ ಕಾಲ ಮೀರಿಲ್ಲ !


-------------------------------------------------------------

ಈಗ ಮುಂಜಾವು.

ನನ್ನ ಕೈಯ್ಯಲ್ಲಿದೆ ಇನ್ನೊಂದು ಕರಗದ ದಿನ.
ಇನ್ನೊಂದು ದಿನ- ಕೇಳಲು ಹಾಗೂ ಪ್ರೀತಿಸಲು,
ಕಳೆದುಕೊಳ್ಳಲು ಹಾಗೂ ವೈಭವತೆಯನ್ನು ನೋಡಲು.
ನಾನು ಇನ್ನೊಂದು ದಿನಕ್ಕಾಗಿ ಇಲ್ಲಿದ್ದೇನೆ.

ನಾನು ಈ ಮುಂಜಾವಿಗೆ ಇರದವರ ಬಗ್ಗೆ ಆಲೋಚಿಸುತ್ತಿದ್ದೇನೆ.

ನಾನು ಈ ದಿನವ ಏನನ್ನೂ ಬಯಸದೇ ಬದುಕುವೆ.
ನಾನು ಕೇವಲ ಬದುಕಲು ಬಯಸುವೆ.

-------------------------------------------------------------

ನಮ್ಮ ಜೀವನವು ಸಣ್ಣ ಸಣ್ಣ ವಾದ ವಿವಾದಗಳಲ್ಲಿ ನಲುಗಿಹೋಗಿತ್ತು. ಆದರೆ ಈಗ ನಾವು ವಾದ ವಿವಾದ ಯಾವುದರ ಬಗ್ಗೆ ಎಂದು ತಿಳಿಯಲು ದೊಡ್ಡದಾಗಿ ವಾದ ವಿವಾದ ಮಾಡುತ್ತೇವೆ.

08 November 2007

ನಾನು ಮತ್ತು ಪುಸ್ತಕ

ಟ್ರೈನಿನಲ್ಲಿ ಕೆಲಸಕ್ಕೆ ಬರುತ್ತಿರುವಾಗ ಪಕ್ಕದಲ್ಲಿ ನಿಂತ ಸಣ್ಣ ಕಣ್ಣಿನ ಆಸಾಮಿ ಆಯತಪ್ಪಿ ಬಿದ್ದಾಗಲೇ ನಾನು ನನ್ನ ಪುಸ್ತಕದ ಪರಿಧಿಯಿಂದ ಹೊರ ಬಂದಿದ್ದು. ಕಣ್ಣು ಮುಚ್ಚಿ ನಿಂತಿರುವವರು, ಸಿಕ್ಕ ಸಣ್ಣ ಜಾಗದಲ್ಲಿಯೇ ತಮ್ಮದೆ ಆದ ಭ್ರಮಾ ಲೋಕ ಸೃಷ್ಟಿಸ ಬಲ್ಲ ಪುಸ್ತಕ ಪ್ರೇಮಿಗಳು , ಕಣ್ಣು ಮುಚ್ಚಿ ಸದಾ ಸಂಗೀತ ಲೋಕದಲ್ಲಿ ವಿಹರಿಸುವವರು ಮುಂತಾದ ತಮ್ಮ ಸ್ವಂತ ಜಗತ್ತಿನಲ್ಲಿ ಪ್ರಯಾಣಿಸುವ ಸಹ ಪ್ರಯಾಣಿಕರನ್ನು ಹೊತ್ತ ಮೆಟ್ರೊ ಟ್ರೇನಿಗೆ ಗಮ್ಯ ತಲುಪುವ ತವಕ.

ಪುಸ್ತಕ ಹಿಡಿದು ಕಾಲದ ಸದುಪಯೋಗ ಪಡೆಯುವವರಲ್ಲಿ ನಾನೂ ಒಬ್ಬ. ನನ್ನ ಪುಸ್ತಕ ಪ್ರೇಮ, ನನಗೆ ತಗಲಿ ಹಾಕಿಕೊಂಡಿದ್ದು ನನ್ನ ಶಾಲಾ ದಿನದಲ್ಲಿ. ಬೊಂಬೆಮನೆ, ಚಂದಮಾಮ, ಬಾಲಮಿತ್ರದೊಂದಿಗೆ. ನನ್ನ ಓದುವ ಗೀಳಿಗೆ ನನ್ನ ತಂದೆ ಹಾಗೂ ಅಗ್ರಜನಿಂದ ಪ್ರೋತ್ಸಾಹದಾಯಕವಾಗಿ ಸದಾ ನನ್ನ ಜೋಳಿಗೆ ಪುಸ್ತಕದಿಂದ ತುಂಬಿರುತ್ತಿತ್ತು. ಅಲ್ಲಿನಿಂದ ಶುರುವಾದ ಪುಸ್ತಕದ ಹಿಂದಿನ ಓಟ ಇನ್ನೂ ಮುಗಿದಿಲ್ಲ. ಅದೊಂದು ಜೀವನ ಪರ್ಯಂತದ ಓಟ - Marathon for Lifetime.

- - - - - - - - - - - - - - - - - -

ಚಿಕ್ಕವನಿದ್ದಾಗ ಮುಂದೆ ಎನಾಗಬೇಕು ಎನ್ನುವ ಆಶೆಯಲ್ಲಿ ಗ್ರಂಥಪಾಲಕನಾಗುವ ಆದಮ್ಯ ಆಶೆಯೂ ಒಂದಾಗಿತ್ತು. ಕಾಲದ ಗತಿಯಲ್ಲಿ ಬದಲಾವಣೆಯ ಗಾಳಿಯಲ್ಲಿ ಮೂಲ ಸ್ವರೂಪ ಕಳೆದುಕೊಂಡು ಇಲ್ಲಿಗೆ ಬಂದು ತಲುಪಿ ಆಗಿದೆ. ಆ ಮುಗ್ಧ ನೆನಪುಗಳ ಗಾಳಿ ಬಿಸಿದಾಗ ಖುಷಿಯಾಗುವುದಂತೂ ಖಂಡಿತ.

- - - - - - - - - - - - - - - - - -

ಟೊಕೀಯೊಗೆ ಬಂದ ನಂತರ ಇಲ್ಲಿ Alien Registration Card ಹಾಗೂ ವರ್ಕ ಪರ್ಮಿಟ್ ಸಿಕ್ಕ ನಂತರ ಮೊದಲು ಮಾಡಿದ ಕೆಲಸ ಲೈಬ್ರರಿ ಕಾರ್ಡ ಮಾಡಿಸಿದ್ದು. ಇಲ್ಲಿ ಪ್ರತಿ ಗ್ರಂಥಾಲಯದಲ್ಲಿಯೂ ಪುಸ್ತಕ ಉಚಿತ. ಆ ಗ್ರಂಥಾಲಯದ ಕಾರ್ಡ್ ಇದ್ದರೆ ಆಯಿತು. ಪ್ರಸ್ತುತ ನನ್ನ ಬಳಿಯಲ್ಲಿ ಎರಡು ಕಾರ್ಡ್ ಇದೆ. ನಾನು ಖಾಯಂ ಹೋಗುವುದು ಹಿಬಿಯಾ ಗ್ರಂಥಾಲಯಕ್ಕೆ. ಒಟ್ಟಾರೆ ೧೦ ಪುಸ್ತಕ ಉಚಿತ. ೨೧ ದಿನಗಳ ಎರವಲು ದಿನ. ಹಾಗೆಯೇ ಸಾಂದ್ರ ಬಿಲ್ಲೆ ( CD ) ಯೂ ಎರವಲು ಸೇವೆಯಲ್ಲಿ ಇದೆ. ಆದರೆ ಕೇವಲ ೫ CD , ೧೫ ದಿನಗಳ ಕಾಲ. ಆಂಗ್ಲ ಭಾಷೆಯ ವಿಭಾಗ ಗ್ರಂಧಾಲಕ್ಕೆ ಹೋಲಿಸಿದರೆ ಸಣ್ಣದೆನಿಸಿದರೂ ಒಳ್ಳೆಯ ಸಂಗ್ರಹ ಇದೆ. ಭಾರತದಲ್ಲಿ ಬಹಿಷ್ಕಾರವಾದ ಸಲ್ಮಾನ್ ರಶ್ದಿ ಬರೆದ Satanic verses ಸಹ ಓದುವ ಯೋಗ ನನಗೆ ಇತ್ತು ಅಂಥ ಇಲ್ಲಿ ಆ ಪುಸ್ತಕ ನೋಡಿದಾಗಲೆ ತಿಳಿದಿದ್ದು. ಒಟ್ಟಿನಲ್ಲಿ ಕನ್ನಡದ ಪುಸ್ತಕದ ಕೊರತೆ ಬಿಟ್ಟರೆ ಮತ್ತೆನೂ ಇಲ್ಲ.

- - - - - - - - - - - - - - - - -

ಇಲ್ಲಿ ಪುಸ್ತಕದ ಅಂಗಡಿಯಲ್ಲಿ ನಿಂತು ಯಾವುದೇ ಪುಸ್ತಕವನ್ನೂ ಓದಬಹುದು. ಯಾರೂ ಏನೂ ಹೇಳುವುದಿಲ್ಲ. ಕೆಲವೊಂದು ಪುಸ್ತಕಾಲಯದಲ್ಲಿ ಈ ರೀತಿ ಪುಸ್ತಕ ಓದಲು ಬೇರೆ ಜಾಗವೇ ಇದೆ !

ಟಿಪ್ಪಣೆ: Tachiyomi suru (立ち読みする)- ಪುಸ್ತಕಾಲಯದಲ್ಲಿ ನಿಂತು ಓದುವುದು.

07 November 2007

ಬಾಳ ಪುಟದಿಂದ

ಮುಚ್ಚಿ ಕೊಟ್ಟಿದ್ದರ ಬಗ್ಗೆ ಬಡಾಯಿ ಕೊಚ್ಚಬಾರದು.

ಕಳೆದು ಹೋದದ್ದು ಹುಡುಕಿದರೆ ಸಿಗಬಹುದು; ದೋಚಿಕೊಂಡು ಹೋದದ್ದು ಎಂದಿಗೂ ಸಿಗಲಾರದು.

ಸಿಕ್ಕಷ್ಟರಲ್ಲಿಯೇ ತೃಪ್ತಿ ಯಾರೂ ಹೊಂದುವುದಿಲ್ಲ;
ಮುಂದಕ್ಕೆ ಹೋಗಿ ದೋಚುವ ಆಶೆಯನ್ನು ( ಯಾರೂ ) ಬಿಡುವುದೂ ಇಲ್ಲ.

( ಸಿಕ್ಕಿದಾಗ ) ನುಂಗಿದವ ಬದುಕಿದ.
ನೋಡಿದವ ಸೊರಗಿದ.

ಸಣ್ಣದಕ್ಕೆ ಆಶೆ ಪಡುವುದು ಮೂರ್ಖತನ.
ದೊಡ್ಡದ್ದು ಸಿಕ್ಕರೆ ಬಿಡುವುದೂ ಮೂರ್ಖತನ.

ಬಹುಮಾನ ಕೊಡುವವರನ್ನು ಅವಲಂಬಿಸಿದೆಯೇ ಹೊರತು ಅರ್ಹತೆಯುಳ್ಳವರನ್ನಲ್ಲ !

27 October 2007

ಹಣ

ಹಣ ಇಲ್ಲದಿರುವಾಗ ಬರುವ ತೊಂದರೆಗಳು .. ಇವುಗಳ ಬಗ್ಗೆ ಆಲೋಚಿಸುತ್ತ ಕಳೆದ ಆ ದಿನಗಳಲ್ಲಿ ಬರೆದ ಟಿಪ್ಪಣೆಗಳಿಂದ ಆಯ್ದ ಕೆಲವು ತುಣುಕುಗಳು

* ಮನುಷ್ಯನಿಗೆ ಹಣದ ಹುಚ್ಚು ಇರಕೂಡದೆಂದು ನಂಬುವವರಲ್ಲಿ ನಾನೂ ಒಬ್ಬ. ಆದರೆ, ಹಣವಿಲ್ಲದಿರುವುದರಿಂದ ಬರುವ ಸಮಸ್ಯೆಗಳು ಬರಕೂಡದೆಂದು ನನ್ನ ಕೋರಿಕೆ.
* ಒಂದು ಸಲ ಹಣ ಬರಲು ಪ್ರಾರಂಭವಾದರೆ ಅದು ಪ್ರವಾಹದಂತೆ, ಅಲೆಗಳಂತೆ ಬರುತ್ತಿರುತ್ತದೆ. ಇಷ್ಟೊಂದು ಹಣ ಈ ಪ್ರಪಂಚದಲ್ಲಿ ಇಷ್ಟು ದಿನ ಎಲ್ಲಿತ್ತು ಎಂದು ನಾವು ಆಶ್ಚರ್ಯ ಪಡುವಂತೆ ಮಾಡುತ್ತದೆ.
* ಊಟವಿಲ್ಲದೆ ದಿನಗಟ್ಟಲೆ ಕಳೆದ ಸ್ಥಿತಿಯಿಂದ ಹಣವಿದ್ದರೆ ಲೆಕ್ಕವೇ ಇರುವುದಿಲ್ಲ ಸ್ಥಿತಿಗೇರಲು, ಮೊದಲಿನಿಂದಲೂ ನನಗಿರುವ ಏಕೈಕ ಅರ್ಹತೆ – “ ಹಣದ ಬಗ್ಗೆ ಆಕಾಂಕ್ಷಾಪೂರಿತವಾದ ಅವಗಾಹನೆ ಮಾತ್ರ”
* ಹಣ ಸಂಪಾದಿಸುವ ಕಲೆಯನ್ನು ಒಂದು ಜವಾಬ್ದಾರಿಯೆಂದೂ, ಅಭ್ಯಾಸವಾಗಿಯೂ ಬದಲಾಯಿಸಬೇಕೆಂದೂ, ಅದಕ್ಕಾಗಿ ಈ ಪ್ರಪಂಚದಲ್ಲಿ ತುಂಬಾ ಅವಕಾಶಗಳಿವೆ ಎಂದೂ, ಹಣ ಸಂಪಾದಿಸುವುದು ಒಂದು ಆನಂದದಾಯಕವಾದ ಪ್ರಕ್ರಿಯೆಯೇ ವಿನಾ ಕಷ್ಟಪಡುವುದೋ, ಬೇರೆಯವರಿಗೆ ಮೋಸ ಮಾಡುವುದೋ ಅಲ್ಲವೆಂದು ನಾವು ಅರಿತುಕೊಳ್ಳಬೇಕು.
* ಹಣ ಇರುವವರು ಬೇರೆ. ಹಣ ಸಂಪಾದಿಸುವವರು ಬೇರೆ.

08 October 2007

ಆತ್ಮಗತ ಮಾತು

ನಿಮ್ಮ ಮನೆಯ ಬಾಗಿಲನ್ನು ಅದೃಷ್ಟ ಬಡಿಯುವುದು. ( ನೆನಪಿರಲಿ : ನೆಂಟರೂ ಕೂಡ ! ).
For the first time ‘Fortune’ knocks. Next time it’s his daughter that knocks the door, ie. ‘Mis-fortune’.
ಅದೃಷ್ಟ ಎನ್ನುವುದು ಒಮ್ಮೆ ಮಾತ್ರ ಬಾಗಿಲು ಬಡಿದರೆ ‘ ದುರಾದೃಷ್ಟ ‘ ನೀವು ಬಾಗಿಲು ತೆಗೆಯುವ ತನಕ ಬಡಿಯುತ್ತಲೇ ಇರುವುದು.

ಪ್ರತಿಫಲ ಬಯಸಿದರೆ ಅದು ಸೇವೆಯಾಗಲಾರದು. ಅದೊಂದು ಕೆಲಸವಾದಿತು.
ಅದಕ್ಕಾಗಿಯೇ ಸಾರ್ವಜನಿಕ ಆಸ್ಪತ್ರೆ , ಸರಕಾರಿ ಕಛೇರಿಯಲ್ಲಿ ‘ ಪ್ರತಿಫಲ ‘ ಕೊಟ್ಟರೆ ಮಾತ್ರ ನಿಮ್ಮ ಕೆಲಸವಾದಿತು ! ಹಾಗೆಯೇ ಸರಕಾರಿ ಕಛೇರಿಯ ಗೋಡೆಯ ಮೇಲೆ ಕಾಣುವ ಬರಹ – “ ಸರಕಾರಿ ಕೆಲಸ , ದೇವರ ಕೆಲಸ “ . ಆ ಸರಕಾರಿ ಕೆಲಸ , ದೇವರಿಗೇ ಪ್ರೀತಿ. ದೇವರೇ ಬಂದು ಆ ಕೆಲಸ ಮಾಡಿ ಕೊಡಬೇಕು.

ದಲಾವಣೆ ನಮ್ಮ ವ್ಯಕ್ತಿತ್ವದಲ್ಲಿ ಆಗಬೇಕು. ವರ್ತನೆಯಲ್ಲಿ ಅಲ್ಲ.

ನಗೆ ತುಂಬಾ ಬೇಸರವಾದಾಗ, ಘಾಸಿಗೊಂಡಾಗ, ನನಗೆ ನಾನೇ ತುಂಬಾ ನಿರುಪಯುಕ್ತ ಅನ್ನಿಸಿದಾಗ ಒಂದು ವಿಷಯ ನೆನಪು ಮಾಡಿಕೊಳ್ಳುವೆ ! ಆವತ್ತು ಕೋಟ್ಯಂತರ ವೀರ್ಯಾಣುಗಳು ಸ್ಪರ್ಧೆಗೆ ಬಿದ್ದಿದ್ದಾಗ ಅವೆಲ್ಲವನ್ನೂ ಹಿಂದಕ್ಕೆ ಹಾಕಿ ಮಾತೃಗರ್ಭಕ್ಕೆ ಸೇರಿ ಮಗುವಿಗೆ ರೂಪು ಪಡೆದಿದ್ದು ಅತ್ಯಂತ ಯಶಸ್ವಿ ವೀರ್ಯಾಣು ನಾನೇ ಆಗಿದ್ದೆ!

ಡಿ ಜಗತ್ತಿನ ಅನುಕಂಪ ಬೇಡುವ ಮನಸ್ಥಿತಿಯನ್ನು ದೂರವಿಟ್ಟರೆ ಮಾತ್ರ ಒಬ್ಬ ಮನುಷ್ಯ, ಏಕಾಂತದಲ್ಲಿ ಗಾಢವಾದ ಜೀವನ ದರ್ಶನ ಹುಟ್ಟುತ್ತದೆ.

ನು ನಡೆಯಿತೆಂದಲ್ಲ ಪ್ರಶ್ನೆ. ಅದನ್ನು ಹೇಗೆ ನೋಡಿದೆವೆಂದು ಉತ್ತರ.