Showing posts with label ಕವನ. Show all posts
Showing posts with label ಕವನ. Show all posts

30 January 2008

ಹಣ (ಕವನ)

(ಊರೂರು ತಿರುಗುವ ಸಾಧುಗಳು ನೋಡಿ ಪ್ರೇರಿತವಾಗಿ ಬರೆದ ಈ ಕವಿತೆ ನನ್ನ ಪುಟ ಹಳದಿಯಾದ ನೋಟಪುಸ್ತಕದ ಒಂದು ಪುಟವ ಅಲಂಕರಿಸಿತ್ತು ಇಷ್ಟು ದಿನ. ಇಂದೆಕೋ ಮತ್ತೋಮ್ಮೆ ಆ ಹಳೆಯ ಪುಟಗಳ ಸೆಳೆತೆ ಜಾಸ್ತಿಯಾದ ಕಾರಣ ಪ್ರೀತಿಯಿಂದ ತಿರುವಾಡಿದಾಗ ಕಣ್ಣಿಗೆ ಬಿತ್ತು. )

ಎಲ್ಲೆಲ್ಲೂ ನಾ ಕಾಣುತಿರುವೆ ಹಣ
ಅದಿಲ್ಲದೆ ಜೀವನ ಆಗಿದೆ ಬಣಬಣ
ನಂಬಿದರೆ ಕಾಯಕವೇ ಕೈಲಾಸ
ಬಿಡದು ನಂಟು ಗುಡಿಸಲ ವಾಸ

ಇನ್ನೊಬ್ಬರ ಮೂರ್ಖತ್ವ ಕ್ಯಾಶ ಮಾಡುವ ಕಲೆ
ತಿಳಿದಿರಲು ನಿನಗೆ ನಾ ಹೇಳುವೆ 'ಭಲೇ!'
ಈ ಭೂಮಿತಾಯಿಯ ಮೇಲೆ ಆಣೆ
ನ್ಯಾಯವಾಗಿ ಶ್ರೀಮಂತರಾದವರ ನಾ ಕಾಣೆ *

ಹಣದಿಂದಲೇ ಬರುವ ಆ ಅಂತಸ್ತು
ಅದಿದ್ದವನದೇ ಈಗ ಎಲ್ಲ ಗತ್ತು
ಮನಕ್ಷೋಭೆಯಲಿ ಆಗುವರು ಹೆಣ
ಗಗನಕುಸುಮವಾಗಿರಲು ಕಾಂಚಾಣ

ಮಧ್ಯಮ ವರ್ಗದವರನು ಬಿಡದ ಬವಣೆ
ಇದ್ದಿರಲು 'ಮರ್ಯಾದೆ' ಎಂಬ ಪರದೆ
ಬಡವ,ಸಿರಿವಂತರಲಿ ಇದನು ನಾ ಕಾಣೆ
ನೆನಪಿರಲಿ 'ಮಧ್ಯಮನೆ ಅಧಮ' ಗಾದೆ

ಕೈಗೂಡದಿರಲು ಹಣ ಎಂಬ ಸಂಗಾತಿ
ನಾ ತಿರುಗುತಿರುವೆ ಬಳಿದುಕೊಂಡು ವಿಭೂತಿ

* ( ಇನ್ನೊಬ್ಬರನು ಮೂರ್ಖರ ಮಾಡುವುದು ಊರೂರು ತಿರುಗುವ ಸಾಧು, ಸಂತರ ವರ್ತನೆ ಅಂಥ ಭಾವಿಸಬಾರದು. ಕವನಕ್ಕೆ ಬೇಕಾದ ತ್ರಾಸ, ಪ್ರಾಸಕ್ಕೆ ಇಲ್ಲಿ ಅದರ ಬಳಕೆ ಆಗಿದೆ. ಹಾಗೆಯೇ 'ನ್ಯಾಯವಾಗಿ ಶ್ರೀಮಂತರಾದವರ ನಾ ಕಾಣೆ' ಎನ್ನುವುದು ಒಬ್ಬ ಜೀವವನದಲ್ಲಿ ಅತಿಯಾಗಿ ನೊಂದ, ಕಷ್ಟವನ್ನೆ ಕಂಡ ಮನುಷ್ಯನಿಂದ ಬರುವ ಸಹಜವಾದ ದೂರು ಎನ್ನುವಂತೆ ಇಲ್ಲಿ ಹೇಳಲಾಗಿದೆ.)

29 January 2008

(ಇಲ್ಲದ) ಆ ಹೆಣ್ಣಿಗೆ !

( ಈ ಕವಿತೆ ಬರೆದಿದ್ದು ಜೂನ್-1996 ರಲ್ಲಿ. ಇನ್ನೂ ಬ್ಲಾಗಿನ ಪರಿಚಯ ನನಗಿರದ ಸಮಯದಲ್ಲಿ. ಇಂದು ನನ್ನ ಹಳೆಯ ನೋಟ ಬುಕ್ಕ ತಿರುವುತ್ತಾ ಇದ್ದಾಗ ನೆನಪಿನ ಅಂಗಳದಲ್ಲಿ ಸಿಕ್ಕ ಹಳೆಯ ಕವಿತೆ ಇದು. 1996 ರಲ್ಲಿ ಕವಿತೆ ಬರೆಯುವ ಉತ್ಸಾಹ ಎಷ್ಟಿತ್ತೆಂದರೆ ಆ ಸಮಯದಲ್ಲಿ ಗದ್ಯಕ್ಕಿಂತ ಪದ್ಯವನ್ನೇ ಬರೆದಿದ್ದು ಜಾಸ್ತಿ. ಆ ಸೃಜನಶೀಲತೆ ಬಹಳ ಕಮ್ಮಿ ಅವಧಿ ಜೊತೆ ನೀಡಿದ್ದು ನನ್ನ ನೋಟಬುಕ್ಕಿನೆ ಪುಟ ತಿರುವಿದಾಗ ಯಾರಿಗಾದರೂ ಗೊತ್ತಾಗುತ್ತೆ. ಇಂದು ಖಾಲಿ ಹಾಳೆ ನನ್ನನ್ನು ಅಣುಕಿಸುತ್ತಿದ್ದರೆ, ನಾನು ನನಗೆ ಸಂಬಂದವೇ ಇಲ್ಲ ಅನ್ನುವಷ್ಟು ನೀರ್ಲಪ್ತ ಹಾಗೂ ನಿರ್ಲಜ್ಜ . Somewhere, something is wrong ... I don't know )

ಹೇ, ನೆರೆಮನೆಯ ಹೆಣ್ಣೆ
ನೀನೇ ನನ್ನ ಬದುಕಿನ ಕಣ್ಣೆ!
ನಿನ್ನ ನೆನೆಯುತ ನಾನು
ಎಲ್ಲವ ಮರೆತೆ
ಇರಲು ಒಂದೇ ಚಿಂತೆ,
" ನನ್ನಿಂದ ದೂರವೇಕೆ ನೀನು? "

ನಿನ್ನ ನಗುಮುಖವನ್ನ
ದಿನವೂ ನೋಡಲೇಷ್ಟು ಚೆನ್ನ!
ಆ ತುಂಟ ಕಣ್ಣಿನ ನೋಟ
ಎಲ್ಲರಲೂ ನಾ ಕಾಣೆ
ನನ್ನ ದೇವರಾಣೆ
ನಿನ್ನ ನೋಡದೆ ಸೇರದು ಊಟ

ನೀನು ಹೋಗಲು ದೂರ
ನಾ ನಿತ್ರಾಣಗೊಂಡ ಶೂರ
ಬಿಟ್ಟು ಬಾ ನಿನ್ನ್ ಒಣ ಬಿಗುಮಾನ
ನಿನ್ನ ದಾರಿ ಕಾಯುತ
ನಿಂತಿರಲು ನಾ ಅನವರತ
ಅಂಧಕಾರದಲಿ ಇರುವ ಚಂದ್ರ ನಾ

ದಿನವೂ ಕಣ್ಣುಮುಚ್ಚಾಲೆ ಆಟ
ಇರಲು ನಿಮ್ಮಪ್ಪನ ಕಾಟ
ಮನೆಯಲಿ ಆತನ ಗೈರು ಹಾಜರಿ
ತಂದಿರುವ ಕಳೆ ವಿಶೇಷ
ಎಷ್ಟು ದಿನವೀ ಸಂತೋಷ
ತಿಳಿಯದಿರೆ ನಾ ಕಥಾಂತ್ಯದ ಪರಿ

14 September 2007

ನೀಲುಗಳ ಅರಸುತಾ ....0.3





ನೀನು ಇಲ್ಲಿದರೆಷ್ಟು ಚೆನ್ನ !
ನನ್ನ ಏಕತಾನತೆಯ ಕೊರೆತ ಕೇಳಲು
ಸುಂದರ ಪೂರ್ಣಚಂದ್ರನ ನೋಡಲು
_____________________________

ತಾರೆಗಳ ಮಧ್ಯದೀ
ಬೆಳಗುವ ಪೂರ್ಣಿಮೆ ಚಂದ್ರನೇ
ನಿನ್ನ ಸೌಂದರ್ಯವೂ ಕ್ಷಣಿಕವೇ,
ದಿನ ನಿತ್ಯದ ಏರಿಳಿತದಿ ಸಾವು ಸನ್ನಿಹಿತ

13 September 2007

ನೀಲುಗಳ ಅರಸುತಾ ....0.2




ಭಗವಂತನ ಅಪಾರ ಆಸ್ತಿ ಲಕ್ಷ-ಕೋಟಿ ಇಹುದು,
ಇಬ್ಬನಿ - ನಡುಗುತಿರುವ ಹುಲ್ಲಿನ ಮೇಲೆ
ವಜ್ರದಂದದಿ ಹೊಳೆಯುತಿರಲು


____________________________________












ಡುತಾ, ಓಡುತಾ ಅರಮನೆ ಸೇರಿದರೂ
ಒಬ್ಬಂಟಿಯಾಗಿದ್ದಾಗ ಆವರಿಸಿಕೊಂಡಿದ್ದು -
ಮುಳ್ಳಿನಂತೆ ನಾಟುವ ಪ್ರೀತಿಯ ಗುಡಿಸಲ ನೆನಪು
____________________________________


ಬೆಟ್ಟವ ಹತ್ತಲು ಪ್ರಯತ್ನ ನಿಧಾನವಾಗಿ,
ಅತಿ ನಿಧಾನವಾಗಿ
ಆ ಬಸವನ ಹುಳುವಿನಿಂದ,
ನನ್ನಲ್ಲಿ ಆವರಿಸಿರುವ 'ಕುಂಟುತನ'
ಅರಿವಾಗಿದ್ದು ಆ ಕ್ಷಣದಲ್ಲಿ

____________________________________















ಕಿವಿಬಳಿ ಕುಯ್ಞಿಗುಡುತ್ತಿರುವ ಸೊಳ್ಳೆ
ನನ್ನ ಕೈ ಹೊಡೆತದಿ ಸಾವಿಗೆ ಶರಣು
ಸಾವಿಗೆ ಸ್ವಾತಂತ್ರ್ಯ , ನನಗೆ ಸಿಕ್ಕಿದೆ ಪುನರ್ಜನ್ಮ

07 September 2007

ನೀಲುಗಳ ಅರಸುತಾ ...0.1



____________________________

ತಾಜ್ ಮಹಲನ ಸುಂದರ ಗೋಡೆಯ ಮಧ್ಯೆ
ಆ ರೋಧನ , ರಕ್ತ , ಬೆವರು , ಶೋಷಣೆ
ಎಲ್ಲವೂ ಲುಪ್ತ ಸಮಾಧಿ ಹಾಗೂ ನೀರವ ಮೌನ


____________________________

ಮತ್ತೆ ವಸಂತ ಆರಂಭ :
ಹಳೆಯ ಮೂರ್ಖತ್ವದ ಪುನರ್ ಆವರ್ತನ
ಹೊಸ ತಪ್ಪುಗಳ ಆವಿಷ್ಕಾರ
____________________________

ದೂರದ ಹೊಲದಲ್ಲಿ ಬಿಸಿಲಲಿ
ರೈತನ ಕೆಲಸ ನಡೆಯುತಿದೆ
ಮಾವಿನ ಮರದ ನೆರಳಿನ ಛಾವಣಿಯಡಿ
ಬೆವರು, ಮಣ್ಣಿನ ಸಮ್ಮಿಳನ ಸುಖದ ನಿಟ್ಟುಸಿರಡಿಯಲಿ
____________________________

ದೂರದ ಬೆಟ್ಟದ ಸುಂದರ
ಪ್ರತಿಬಿಂಬ ರೆಕ್ಕೆ ಮುರಿದ
ಆ ದುಂಬಿಯ ಕಣ್ಣುಗಳಲ್ಲಿ

06 September 2007

ಮರೆತ ಹಾದಿಯಲಿ - ಹಿನ್ನೋಟ

ಕವನಗಳು , ಪನ್ನುಗಳನ್ನು ಬರೆಯುವದರಲ್ಲಿ ಇರುವ ಸುಖ ಮತ್ತೆ , ಮತ್ತೆ
ನನ್ನನ್ನು ಹಿಡಿದೆಳೆದು ಬರೆಯುವ ಹಾದಿಯಲ್ಲಿ ತಂದು ನಿಲ್ಲಿಸಿದಾಗ ಸಿಕ್ಕ ಕೆಲವು ಕಾಯಿಗಳು -

1.
ಕಾಲೇಜಾಯಣ


ವಿಚಿತ್ರ ಲೋಕವೇ ಸರಿ , ಕಾಲೇಜು
ಅಲ್ಲಿ ಎಲ್ಲರಿಗೂ ಒಂದೊಂದು ಕ್ರೇಜು
ಇಲ್ಲಿ ಓದಲು ಬರುವವರು ಕಮ್ಮಿ
ಅರೇ ! ಷೋಡಶಿಯರು ಆಗ್ವರು ಮಮ್ಮಿ

2.
ಜೋಡಿ

ನನ್ನ , ಅವಳ ಪರಿಪೂರ್ಣ ಜೋಡಿ
ಮದುವೆಗೆ ಮೊದಲು - ಪ್ರೇಮದ ಕೋಡಿ
ಜನಿಸಲು ನಾಲಕ್ಕು ಜೀವದ ಕುಡಿ
ಈಗ ಬರಿ ಸಾಲದ ಹೊರೆಯೇ ಬಿಡಿ

3.
ತೀರ್ಪನು ನೀಡಿತು
ನ್ಯಾಯಾಧೀಶರ Mouth
'ಕೊಲೆಗಾರನಿಗೆ ತಕ್ಕ ಸಜಾ " मौत "

4.
ಕ್ಯಾತ ಓದಿದ್ದು
ಕರಿಕೋಟಿನವರ
" Law "
ಪ್ರತಿ ಕೇಸಿನಲ್ಲಿ
ಗೆದ್ದಾಗಲೂ
ಇವಗೆ " ಧನ -Lawಭ "

05 September 2007

ನೀಲುಗಳ ಅರಸುತಾ ...

ನೀಲುಗಳ ಅರಸುತಾ ಹೊರಟಾಗ
ಕೈಗೆಟಕಿದ್ದು ಧೂಳು ಹಿಡಿದ
ಟಿಪ್ಪಣೆ ಪುಸ್ತಕ ..
ತಡಕಾಡಿದಾಗ ಹೊರಬಂದಿದ್ದು
ಹಳೆಯ ನೆನಪು - ಮೈ ಆವರಿಸಿ ಕೊಂಡ ಘಾಟು ಬೆವರಿನ ತರಹ ...
ಜೊತೆಗೆ ಸಿಕ್ಕಿದ್ದು ಈ ಕೆಲವು ಬರಹ. ಬೆಳಕು ಕಾಣದೆ ಅಟ್ಟ ಸೇರಿದ ಬರಹದಲ್ಲಿ ಇದೂ ಒಂದು.

1.
ನಿನ್ನ ಪ್ರೇಮದ ಬೆಳಕಿನಲ್ಲಿ
ನಾನು ನೋಡಿದ ಜಗತ್ತು
ನನ್ನ 'ಕುರುಡ' ಎಂದಾಗ
ಆವರಿಸಿದ್ದು ಅಮವಾಸ್ಯೆಯ ಕತ್ತಲೆ

2.
ಯೌವನ್ನ ಎಂಬ ತೂಗು ಸೇತುವೆ
ಆವರಿಸಿದೆ ಸುಕ್ಕುಗಟ್ಟಿದ ಬಳ್ಳಿ
ಇನ್ನೆಲ್ಲಿ ಆರ್ಭಟದ ತೂಗುವಿಕೆ
ಪುಸ್ತಕದ ಪುಟದಂದದಿ ಮೈ-ಮುಖದ
ಮೇಲೆ ಹರಡಿರಲು ನೆರಿಗೆ.

3.
ಚಳಿಯಾದಾಗ ಮಾತ್ರ ನೀನೆ
ಬೇಕು ಅಂತ ಚಡಪಡಿಸುವ
ಜೀವಕ್ಕೆ ಬೆಳಿಗ್ಗೆ ಹೊತ್ತಿನಲ್ಲಿ
ಸಾಕ್ಷಿ ಹೇಳಲು ಬಾರದ
ಅಮಾಯಕತೆ.

10 August 2007

ಪುಟ ತೀರುವಿದಾಗ ....

ಹರೀಶ
ನಮ್ಮಯ
ವಾಚಾಳಿ ಗೆಳೆಯ ಗೃಹಸ್ಥ
" ಹರೀಶ "
ಅವನ ಮನೆಯಲಿ
ನಾವ್ ಕೂಗಿದರೆ ' ಹರೀ...'
ಬಂದ ಉತ್ತರ ಮಾತ್ರ ' ಶ್ ! '

(ತುಂಬಾ ಹಿಂದೆ ಗೃಹಸ್ಥಾಶ್ರಮ ಸೇರಿದ ವಾಚಾಳಿ ಗೆಳೆಯ ಹರೀಶನ ಕುರಿತು ಹಿಂದೊಮ್ಮೆ ಯಾವಾಗಲೋ ಗೀಚಿದ್ದು )

ಅವಶ್ಯಕತೆ
ಲೇಖಕ ಮದುವೆಯಾದ
ಹೇಳುತಾ
" ಜೀವನದಲಿ ಇದೆ
ಹೆಣ್ಣಿನ
ಅವಶ್ಯಕತೆ "
ದಾಂಪತ್ಯ ಜೀವನದ
ಸವಿ ಉಂಡು
ಬರೆಯುತಿರುವ
' ಆ - ವಿಷ - ಕಥೆ '

Both of these ಚುಟುಕು were written keeping in mind the beauty of ' oxymoron ' , Where contradictory terms are combined to give a special effects like “cruel kindness” or “to make haste slowly.”

09 August 2007

ಕನಸುಗಾರ

ತಿರುಗುವ ಫ್ಯಾನಿನ ಗಾಳಿ
ಆಹಾಹಾ..ಏನಿಂಥ ಚಳಿ
ಕಣ್ಣಾಯಿಸಿದಾಗ ಕಂಡದ್ದು ಚೌಕಟ್ಟು
ಮಧ್ಯದಲಿ ನಾ
ಮನದಿ ಮಂಥನಾ
ಒಬ್ಬಂಟಿ - ನಾ ಪರಿಹರಿಸೆ ಈ ಬಿಕ್ಕಟ್ಟು

ಭಾವನಾವೇಗದಿ ನಾ ಹಕ್ಕಿ
ವಾಸ್ತವದಿ ಅಲ್ಲಾ ನಾ ಸುಖಿ
ನೈಜತೆಯ ನೆರಳೂ ಇಲ್ಲ ಹತ್ತಿರ
ಭಾವನೆಗಳು ಸುಪ್ತ
ಅದರಲ್ಲಿ ನಾ ಲುಪ್ತ
ಏನೂ ವಾಸ್ತವವಾದಿಗೂ ಎನಗೂ ಅಂತರ ?

ತಿರುಗಾಡಿರಲು ಲೋಕ ನೂರಾರು
ನನ್ನ ಜೊತೆ ಇರದೆ ಬೇರೆ ಯಾರು
ಕನಸಿನ ಲೋಕದಿ ಬಣ್ಣದ ಆ ಒಕಳಿ
ತೀರದ ದಾಹ
ಕಾಡುವ ಮೋಹ
ಹೀಗೆಯೇ ಆಗಿದೆ ಜೀವನದ ಸವಕಳಿ

ಎಳೆಯ ಮನ ಕಂಡ ಕಷ್ಟ
ಆಗಿನಿಂದಲೇ ನಾ ರೋಗಿಷ್ಟ
ಅನಸ್ತೇಶಿಯಾದಂತೆ ಕನಸಾದಾಗ ವರ
ಕಾಲಕ್ಕೂ ಅತೀತ
ಭಾವನೆಗಳ ಸಮ್ಮೀಳಿತ
ನಾ ಬವಣೆಯ ಮಧ್ಯವೂ ಸುಖದ ಆಗರ

ಖರ್ಚಿಲ್ಲದೆ ಕಂಡ ಕನಸು
ಮುದಗೊಂಡ ನನ್ನ ಮನಸು
ಆವರಿಸಿದಾಗ ಕಷ್ಟ ಎಂಬ ಭಾರ
ಯೋಚಿಸಲು ಹೆದರಿ
ನಿರ್ಲಿಪ್ತತೆಯೆ ಸರಿ !
ಪರಿಹಾರ ಉಳಿಯಿತು ಬಹು ದೂರ

ವಾಸ್ತವತೆ ತಿಳಿದಾಗ ನಾ ಬೆಪ್ಪು
ಆವರಿಸಿರಲು ನನ್ನನು ಮುಪ್ಪು
ಕಂಡಿರುವೆ ನಾ ಕನಸಿನ ಹತ್ತಾರು ಮುಖ
ಬೇಡ ಮರೀಚಿಕೆ !
ಜೀವನದಿ ಏಕೆ ಅಂಜಿಕೆ
ವಾಸ್ತವತೆ ಅನುಭವಿಸಿ ನಾ ಪಡುವೆ ಸುಖ

08 August 2007

ನಿಶೆಯ ಆನಂದ

ಬೇಸಿಗೆ ರಾತ್ರಿಯ ನಿಶ್ಯಬ್ದ ವಾತಾವರಣ
ತಂದಿದೆ ದಣಿದ ಮನಕ್ಕೆ ಆಹ್ಲಾದತನ
ಈ ನಿಶಾಚರ ರಾತ್ರಿಗೆ ಇದೆ ತನ್ನದೆ ಬೆಡಗು ಬಿನ್ನಾಣ
ಇದೋ ...
ನಿದ್ದೆ ನೀಡುವ ಆ ಮುಗ್ಧ ಸುಖಕ್ಕೆ ನನ್ನ ನಮನ

20 July 2007

ಹರಟೆ - 4

ಸಿರ್ಸಿಯಲ್ಲಿದ್ದಾಗ ಬರೆದ ಕೆಲವು ಚುಟುಕಿಗೆ ಈಗ ಅರ್ಥವೇ ಇಲ್ಲ ಅನ್ನಿಸ್ತಾ ಇದೆ. ಟೋಕಿಯೊದಲ್ಲಿ ಅರ್ಥ ಕಳೆದುಕೊಂಡರೂ ಇನ್ನೂ ಸಿರ್ಸಿಯಲ್ಲಿ ಅದು ಚಾಲ್ತಿಯಲ್ಲಿರುವ ವಿಷಯವೇ ಅಂಥ ಅಮ್ಮ ಫೊನ್ ಮಾಡಿದಾಗ ಹೇಳ್ತಾಇದ್ರು. ಅದಕ್ಕೆ ಇಲ್ಲಿ ನಿಮ್ಮಗಳ ಜೊತೆ ಹಂಚಿಕೊಳ್ತಾ ಇರೊದು !

ಕ-ತ್ತಲೆಗೂ
ನಾವು ಕೊಡುವ - ರೆಂಟು
ನಮ್ಮ ನಿಮ್ಮೆಲ್ಲರ
ಗಗನ ಕುಸುಮ
ಕ-ರೆಂಟು

ದೇವ ಮಾನವ :
ಕಾವಿ ಬಟ್ಟೆಯ ಈತ
ಜನರೆದುರು
'ಹೋಲಿ'
ಒಬ್ಬಂಟಿ-ಜೊತೆ
ಲಲನೆ ಇದ್ದರೆ
'ಆಹಾ..ಪೊಲಿ ! '

ನಮ್ಮ ಎರಿಯಾದ
ದಾದಾನಂತೆ ಮೆರೆದ
'ಪೋಲಿಸು'
ಆತ್ಮಹತ್ಯೆ ಮಾಡಿಕೊಂಡಾಗ
ಜನರಾಡಿದ್ದು ಮಾತ್ರ
ಸತ್ತ ಆ ' ಪೊಲಿ-ಸೂ ****'

ಆ ಹೆಗ್ಗಡೆಗೆ 'ಹೆಂಡ'
ದಂತೆ ನಶೆ
ನೀಡುವ
ಆ ಹೆಗ್ಗಡತಿ ತಾನೆ
ಆತನ 'ಹೆಂಡ-ತಿ'

21 May 2007

ಕವನ ಪ್ರಸಂಗ-2



ನೂರು ನೆನಪುಗಳ ಆಗರ
ಈ ಕಂಗಳ ನೋಟ
ದೀಪದ ಸುತ್ತ-ಮುತ್ತ
ಬೆಳಕು-ಕತ್ತಲೆಯ ಮೈತ್ರಿ ಕೂಟ

ಕಂಡರೂ ಕಾಣದ
ನೋಡಿದರೂ ಹೇಳಲಾಗದ
ಅಪರೂಪದ ಸ್ಥಿತಿ
ಇರಲು ಈ ಸುಂದರ ಚಿತ್ರ
ಶಬ್ದಸಾಗರದಿ ತಿಳಿಯಾಗಬಹುದೇ
ಎನ್ನುವ ಭೀತಿ

ನೂತನ-ಚಿರನೂತನ
ಪ್ರತಿಯೊಂದು ನೋಟ
ಬಣ್ಣದ ಚಿತ್ತಾರಕ್ಕೆ
ಶಬ್ದದೀ ಹೊಸ ಮೈಮಾಟ!


15 May 2007

ಕವನ ಪ್ರಸಂಗ

ಕಲೆ

ಗಂಡನಿಗೆ ಗೊತ್ತು
ಬ್ಯಾಂಕಿನಿಂದ
cheque - ಕ್ಯಾಶ್ ಮಾಡುವ ಕಲೆ,

ಹೆಂಡತಿಗೆ ಗೊತ್ತು
ಪತಿ ದೇವರ
ಜೇಬೆಂಬ ಹುಂಡಿಯಲ್ಲಿನ
Cash- ಚೆಕ್ ಮಾಡುವ ಕಲೆ !

ಅಮಲು

ಮುಂಜಾವಿನಿಂದ
ಸಂಜೆಯ ತನಕ -
ಕುಡಿತ ವಿರೋಧಿ ಮಾತು
ಅನೇಕರಿಗೆ ಕರ-ತಲಾ-ಮಲ-ಕ...

ಗೋಧೂಳಿ ಸಮಯದೊಂದಿಗೆ
ದೂಳು-ತಿನ್ನುತ ರಸ್ತೆ ಬದಿಯಲಿ
ಬರಿ-'ತಲೆ'-'ಅಮಲು'-(ಹಿಕ್,ಹಿಕ್)-ಕ

-ವೈ.ಎನ್.ಕೆ. ಯವರ ಹುಟ್ಟಿದ ಹಬ್ಬ ( ಮೇ 16) .
ಅವರ ನೆನಪಿಗೆ.