27 August 2007

ಅಲೆಮಾರಿಯ ದಿನಚರಿಯಿಂದ ...

ದಿನ -7300
ಬದುಕಿದ್ದಾಗಲೆಲ್ಲ 'ಸಾವು,ಸಾವು' ಎಂದು ಬಡಬಡಿಸುತ್ತಾ - ಸಾಯುವ ದಿನ ಬದುಕಿಗಾಗಿ ಹಂಬಲಿಸಿದ್ದು ಎಂಥ ವಿಪರ್ಯಾಸ ( ಪ್ರತ್ಯಕ್ಷ ದರ್ಶನ )

ದಿನ - 7308
ಪಂಚೇಂದ್ರಿಯಗಳನ್ನು ಮೀರಿ ಒಳನುಗ್ಗುವ ಅನುಭವಗಳು ನಮಗೆ ಸತ್ಯದ ದರ್ಶನ ಮಾಡಿಸಬಲ್ಲವು.ಅಕ್ಷರಗಳ ಮೂಲಕ ಒಳಸೇರಿದಷ್ಟೇ ನಮ್ಮನ್ನು ನಿಜವಾಗಿಯೂ ಒಳಗೊಳ್ಳಬಲ್ಲದು.ಒಳಗೊಳಗೆ ಬೆಳೆಯಬಲ್ಲದು.ಕಾಣದ ದಾರಿಯಲ್ಲಿ ಕರೆದೊಯ್ಯಬಲ್ಲುದು.

ದಿನ - 10885
ಬದುಕುವ ಭಯ - ಸಾವಿನ ಭಯಕ್ಕಿಂತ ದೊಡ್ಡದು. ( 01/02/**** ).
ಆದರೆ ಸಾವಿನ ಸಾರ್ಥಕತೆಯಲ್ಲೇ ಬದುಕಿನ ನಿರರ್ಥಕತೆಯ ಅರಿವಾಗುವುದು. ( ಹಿಂದೊಮ್ಮೆ ನನ್ನ ದಿನಚರಿಯಲ್ಲಿ ಬರೆದ ನೆನಪು - 'ಆತ್ಮಹತ್ಯೆ ಮಾಡಿಕೊಳ್ಳಲು ಅಪಾರವಾದ ಧೈರ್ಯ ಬೇಕು. ಹೇಡಿಗಳು ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಸಾವಿನಲ್ಲಿ ಒಂದು ರೀತಿಯ ಪ್ರಶಾಂತತೆ ಮನುಷ್ಯರನ್ನು ಆವರಿಸುತ್ತದೆ ಎಂದು ನನ್ನ ಅನಿಸಿಕೆ ')

ದಿನ - 9754
ಮದುವೆ ಎನ್ನುವುದು ಅತಿ ಆಶೆ ಮತ್ತು ಅತ್ಯಧಿಕ ಅವಕಾಶಗಳ ಸಂಗಮ !

ದಿನ - 9755
ಬಿಡುವದರಲ್ಲಿ ಇರುವ ಆನಂದ , ಹಿಡಿಯುವದರಲ್ಲಿ ಇಲ್ಲ.
ಸಮಸ್ಯೆಯ ಸಾಕ್ಷಾತ್ಕಾರವೇ ಸಮಸ್ಯೆಗೆ ಪರಿಹಾರವೂ ಕೂಡ !

ದಿನ - 10884
ನೀವು ಸ್ವರ್ಗಕ್ಕೆ ಹೋಗಬಯಸಿದರೆ ನಿಮಗೊಂದು ಕಿವಿಮಾತು..
(ನೀವು ಸತ್ತಾಗ ಮಾತ್ರ ಇದು ಸಾಧ್ಯ. ಇದು ಜೀವನದ ಕಟು ಸತ್ಯವೂ ಹೌದು ! )

No comments: