07 November 2007

ಬಾಳ ಪುಟದಿಂದ

ಮುಚ್ಚಿ ಕೊಟ್ಟಿದ್ದರ ಬಗ್ಗೆ ಬಡಾಯಿ ಕೊಚ್ಚಬಾರದು.

ಕಳೆದು ಹೋದದ್ದು ಹುಡುಕಿದರೆ ಸಿಗಬಹುದು; ದೋಚಿಕೊಂಡು ಹೋದದ್ದು ಎಂದಿಗೂ ಸಿಗಲಾರದು.

ಸಿಕ್ಕಷ್ಟರಲ್ಲಿಯೇ ತೃಪ್ತಿ ಯಾರೂ ಹೊಂದುವುದಿಲ್ಲ;
ಮುಂದಕ್ಕೆ ಹೋಗಿ ದೋಚುವ ಆಶೆಯನ್ನು ( ಯಾರೂ ) ಬಿಡುವುದೂ ಇಲ್ಲ.

( ಸಿಕ್ಕಿದಾಗ ) ನುಂಗಿದವ ಬದುಕಿದ.
ನೋಡಿದವ ಸೊರಗಿದ.

ಸಣ್ಣದಕ್ಕೆ ಆಶೆ ಪಡುವುದು ಮೂರ್ಖತನ.
ದೊಡ್ಡದ್ದು ಸಿಕ್ಕರೆ ಬಿಡುವುದೂ ಮೂರ್ಖತನ.

ಬಹುಮಾನ ಕೊಡುವವರನ್ನು ಅವಲಂಬಿಸಿದೆಯೇ ಹೊರತು ಅರ್ಹತೆಯುಳ್ಳವರನ್ನಲ್ಲ !

2 comments:

Keshav.Kulkarni said...

'ಸಣ್ಣದಕ್ಕೆ ಆಶೆ ಪಡುವುದು ಮೂರ್ಖತನ. ದೊಡ್ಡದ್ದು ಸಿಕ್ಕರೆ ಬಿಡುವುದೂ ಮೂರ್ಖತನ.', ಸಖತ್ತಾಗಿದೆ.
ಕೇಶವ
www.kannada-nudi.blogspot.com

ಅನಿಕೇತನ said...

ಧನ್ಯವಾದಗಳು ಕೇಶವ !
ನಿಮ್ಮ ಊರು ಧಾರವಾಡವಾ ?